Loading..
ನಾವು ಯಾರು

ಸ್ವಾಗತ

ಕರ್ನಾಟಕದಲ್ಲಿ 1970ರ‌ ದಶಕದ ಕೊನೆಯಲ್ಲಿ, ತುರ್ತುಪರಿಸ್ಥಿತಿಯ ನಂತರದ ದಿನಗಳಲ್ಲಿ ಎಸ್‌ಯುಸಿಐ(ಸಿ) ತನ್ನ ಚಟುವಟಿಕೆಗಳನ್ನು ಆರಂಭಿಸಿತು. ಈಗ ಪಕ್ಷದ ಕೇಂದ್ರ ಪಾಲಿಟ್‌ಬ್ಯೂರೋ ಸದಸ್ಯರಾದ ಕಾಮ್ರೇಡ್ ಕೆ.ರಾಧಾಕೃಷ್ಣ ಮತ್ತು ಬೆರಳೆಣಿಕೆಯ ಇತರ ಸಂಗಾತಿಗಳು ಕರ್ನಾಟಕದಲ್ಲಿ ಪಕ್ಷವನ್ನು ಕಟ್ಟಲು ಆರಂಭಿಕ ವರ್ಷಗಳಲ್ಲಿ ಕಠಿಣ ಪರಿಶ್ರಮ ಪಟ್ಟರು. ನಂತರದ ವರ್ಷಗಳಲ್ಲಿ ಪಕ್ಷವು ರಾಜ್ಯದ ಹಲವಾರು ಜಿಲ್ಲೆಗಳಿಗೆ ವಿಸ್ತರಿಸಿದೆ. ಈಗ, 2025ರಲ್ಲಿ 16 ಜಿಲ್ಲೆಗಳಲ್ಲಿ ಪಕ್ಷವು ಕಚೇರಿಯನ್ನು ಹೊಂದಿದ್ದು, ಎಲ್ಲ 31 ಜಿಲ್ಲೆಗಳಲ್ಲೂ ತನ್ನ ಮುಂದಳಗಳ ಸದಸ್ಯರನ್ನು ಮತ್ತು ಚಟುವಟಿಕೆಗಳನ್ನು ಹೊಂದಿದೆ. ಎಲ್ಲ ವಿಭಾಗಗಳ ಜನ ಸಮೂಹದ ಹೋರಾಟಗಳನ್ನು ಕಟ್ಟುತ್ತಾ ಇತ್ತೀಚಿನ ವರ್ಷಗಳಲ್ಲಿ ಪಕ್ಷವು ಕರ್ನಾಟಕದ ಮುಂಚೂಣಿ ಎಡಪಕ್ಷವಾಗಿ ಹೊರಹೊಮ್ಮುತ್ತಿದೆ.

ಲೇಖನಗಳು