ಬೆಲೆ ಏರಿಕೆ, ಸಾರ್ವಜನಿಕ ಶಿಕ್ಷಣ, ಆರೋಗ್ಯ ವ್ಯವಸ್ಥೆ ಬಲಪಡಿಸಲು ಹಾಗೂ ಜನಪರ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಎಸ್ ಯು ಸಿ ಐ (ಕಮ್ಯುನಿಸ್ಟ್) ಪಕ್ಷದಿಂದ ರಾಜ್ಯ ಮಟ್ಟದ ಹೋರಾಟ
ಕಾಮ್ರೇಡ್ ಕೆ. ಉಮಾ, ರಾಜ್ಯ ಕಾರ್ಯದರ್ಶಿ, ಎಸ್ ಯು ಸಿ ಐ ( ಕಮ್ಯುನಿಸ್ಟ್)
ಕಾಮ್ರೇಡ್ ಕೆ. ರಾಧಾಕೃಷ್ಣ, ಪಾಲಿಟ್ ಬ್ಯೂರೋ ಸದಸ್ಯರು, ಎಸ್ ಯು ಸಿ ಐ ( ಕಮ್ಯುನಿಸ್ಟ್)
ಕಾಮ್ರೇಡ್ ರಾಮಾಂಜಿನಪ್ಪ ಆಲ್ದಳ್ಳಿ , ರಾಜ್ಯ ಸೆಕ್ರಿಟೇರಿಯೇಟ್ ಸದಸ್ಯರು, ಎಸ್ ಯು ಸಿ ಐ ( ಕಮ್ಯುನಿಸ್ಟ್)
ನಾವು ಯಾರು
ಸ್ವಾಗತ
ಕರ್ನಾಟಕದಲ್ಲಿ 1970ರ ದಶಕದ ಕೊನೆಯಲ್ಲಿ, ತುರ್ತುಪರಿಸ್ಥಿತಿಯ ನಂತರದ ದಿನಗಳಲ್ಲಿ ಎಸ್ಯುಸಿಐ(ಸಿ) ತನ್ನ ಚಟುವಟಿಕೆಗಳನ್ನು ಆರಂಭಿಸಿತು. ಈಗ ಪಕ್ಷದ ಕೇಂದ್ರ ಪಾಲಿಟ್ಬ್ಯೂರೋ ಸದಸ್ಯರಾದ ಕಾಮ್ರೇಡ್ ಕೆ.ರಾಧಾಕೃಷ್ಣ ಮತ್ತು ಬೆರಳೆಣಿಕೆಯ ಇತರ ಸಂಗಾತಿಗಳು ಕರ್ನಾಟಕದಲ್ಲಿ ಪಕ್ಷವನ್ನು ಕಟ್ಟಲು ಆರಂಭಿಕ ವರ್ಷಗಳಲ್ಲಿ ಕಠಿಣ ಪರಿಶ್ರಮ ಪಟ್ಟರು. ನಂತರದ ವರ್ಷಗಳಲ್ಲಿ ಪಕ್ಷವು ರಾಜ್ಯದ ಹಲವಾರು ಜಿಲ್ಲೆಗಳಿಗೆ ವಿಸ್ತರಿಸಿದೆ. ಈಗ, 2025ರಲ್ಲಿ 16 ಜಿಲ್ಲೆಗಳಲ್ಲಿ ಪಕ್ಷವು ಕಚೇರಿಯನ್ನು ಹೊಂದಿದ್ದು, ಎಲ್ಲ 31 ಜಿಲ್ಲೆಗಳಲ್ಲೂ ತನ್ನ ಮುಂದಳಗಳ ಸದಸ್ಯರನ್ನು ಮತ್ತು ಚಟುವಟಿಕೆಗಳನ್ನು ಹೊಂದಿದೆ. ಎಲ್ಲ ವಿಭಾಗಗಳ ಜನ ಸಮೂಹದ ಹೋರಾಟಗಳನ್ನು ಕಟ್ಟುತ್ತಾ ಇತ್ತೀಚಿನ ವರ್ಷಗಳಲ್ಲಿ ಪಕ್ಷವು ಕರ್ನಾಟಕದ ಮುಂಚೂಣಿ ಎಡಪಕ್ಷವಾಗಿ ಹೊರಹೊಮ್ಮುತ್ತಿದೆ.